ನಿಜಕ್ಕೂ ಖುಷಿಯಿದೆ.. ಹೆಮ್ಮೆಯಿದೆ. ಪ್ರಕೃತಿ ಸೌಂದರ್ಯವನ್ನ ಸವಿಯಬಲ್ಲ ಊರಿನಲ್ಲಿ ಹುಟ್ಟಿದ್ದಕ್ಕೆ.. ನಮ್ಮೂರಿನಿಂದ ಒಂದುಕಡೆ ಸಮುದ್ರ. ಇನ್ನೊಂದು ಕಡೆ ಸಹ್ಯಾದ್ರಿಯ ಹಸಿರು.. ಮತ್ತೊಂದು ದಿಕ್ಕಿನಲ್ಲಿ ಅಘನಾಶಿನಿ ನದಿಯ ಸೊಬಗಿನ ವಯ್ಯಾರ. ಎಷ್ಟೊಂದು ಸುಂದರವಾದ ಊರು..? ವಿಸ್ಮಯ ತಾಣ ಯಾಣ, ಶಿವಕ್ಷೇತ್ರ ಗೋಕರ್ಣ, ಓಂ ಅಕ್ಷರದ ಅಚ್ಚರಿಯ ಓಂ ಬೀಚ್, ಪೋರ್ಚುಗೀಸರ ಕಾಲದ ತದಡಿ ಬಂದರು, ಗತಕಾಲದ ನೆನಪನ್ನ ಸಾರುವ ಮಿರ್ಜಾನ ಕೋಟೆ.. ಒಂದೇ, ಎರಡೆ! ಹತ್ತಾರು ವಿಶೇಷಗಳು.. ಈ ಎಲ್ಲಾ ಸ್ಥಳಗಳಲ್ಲಿ ಅತ್ಯಂತ ಸುಂದರವಾದದ್ದು ಯಾಣ. ಯಾಕಂದ್ರೆ, ಅದು ಪ್ರಕೃತಿಯೇ ಚಿತ್ರಿಸಿದ ಅದ್ಭುತ ಕೆತ್ತನೆ..
ಸೌಂದರ್ಯ ಪ್ರಿಯರಿಗೆ, ಯಾತ್ರಾರ್ಥಿಗಳಿಗೆ, ಚಾರಣಿಗರಿಗೆ ಬೆಸ್ಟ್ ಸ್ಪಾಟ್. ದಟ್ಟ ಕಾಡು, ಕಪ್ಪು ಮಣ್ಣಿನ ನಡುವೆ ಸಹಜ-ಸುಂದರವಾಗಿ ಅರಳಿನಿಂತ ಕಲ್ಲಿನ ಶಿಖರಗಳು, ಅಕ್ಕಪಕ್ಕದಲ್ಲಿ ಹರಿಯುವ ಸಣ್ಣಸಣ್ಣ ಝರಿಗಳು, ಹಕ್ಕಿ ಪಕ್ಷಿಗಳ ಚೀರಾಟ, ಬದುಕಿನ ಜಂಟಾಟವನ್ನ ಮರೆಸುತ್ತವೆ.. ಅಲ್ಲಿನ ಬೃಹದಾಕಾರದ ಶಿಲಾರೂಪವನ್ನ ನೋಡಿದರೆ, ಎಂಥವರು ಪ್ರಕೃತಿಯ ಮಹಾ ಆಕೃತಿಗೆ ತಲೆ ಬಾಗಿಸಲೇ ಬೇಕು,
ಕಾಲಿದಾರಿಯಲ್ಲಿ ನಡೆದು ಗಣೇಶ ದೇವಸ್ಥಾನವನ್ನ ದಾಟಿ, ಮುಂದಕ್ಕೆ ಹೋಗುತ್ತಿದ್ದಂತೆ ಎದುರಾಗೋದು ಮೋಹಿನಿ ಶಿಖರ. ಸುಣ್ಣದ ಕಲ್ಲಿನಿಂದ ನಿರ್ಮಿತವಾದ ಈ ಶಿಖರ ಮೊದಲ ನೋಟದಲ್ಲೇ ಪ್ರವಾಸಿಗರ ಹೃದಯದಲ್ಲಿ ಅಚ್ಚೊತ್ತಿಬಿಡುತ್ತದೆ. ಅಲ್ಲಿಂದು ಮೆಟ್ಟಿಲುಗಳನ್ನ ಏರುತ್ತಾ, ಮುಂದೆ ಸಾಗಿದೊಡನೆ ಕಾಣುವುದೇ ಭೈರವೇಶ್ವರ ಶಿಖರ. ಇಲ್ಲೆ ಸ್ವಲ್ಪ ಒಳಗಡೆ ಇದೆ ಭೈರವೇಶ್ವರ ದೇವಾಲಯ. ಅಲ್ಲೊಂದು ಬೃಹತ್ ಬಂಡೆಯ ಕೆಳಗೆ ತಾನೆಗೆ ಮೂಡಿಬಂದ ಶಿವಲಿಂಗ ಎರಡು ಮೀಟರ್ ಉದ್ದವಿದೆ. ವಿಶೇಷ ಅಂದ್ರೆ, ಈ ಶಿವಲಿಂಗದ ಮೇಲೆ ಸದಾ ನೀರು ಬೀಳುತ್ತಿರೋದು. ಬಿರುಬೇಸಿಗೆಯಲ್ಲೂ ನೀರು ಮಾತ್ರ ಬತ್ತುವುದಿಲ್ಲ. ಆ ಬೃಹತ್ ಶಿಖರದ ಮೇಲೆ ನೀರು ಎಲ್ಲಿದೆಯೋ? ಅದು ಎಲ್ಲಿಂದ ಬಂದು ಶಿವನ ತಲೆಯ ಮೇಲೆ ಬೀಳುತ್ತೊ? ಇದು ಉತ್ತರ ಸಿಗದ ಪ್ರಶ್ನೆ.
ಸೌಂದರ್ಯ ಪ್ರಿಯರಿಗೆ, ಯಾತ್ರಾರ್ಥಿಗಳಿಗೆ, ಚಾರಣಿಗರಿಗೆ ಬೆಸ್ಟ್ ಸ್ಪಾಟ್. ದಟ್ಟ ಕಾಡು, ಕಪ್ಪು ಮಣ್ಣಿನ ನಡುವೆ ಸಹಜ-ಸುಂದರವಾಗಿ ಅರಳಿನಿಂತ ಕಲ್ಲಿನ ಶಿಖರಗಳು, ಅಕ್ಕಪಕ್ಕದಲ್ಲಿ ಹರಿಯುವ ಸಣ್ಣಸಣ್ಣ ಝರಿಗಳು, ಹಕ್ಕಿ ಪಕ್ಷಿಗಳ ಚೀರಾಟ, ಬದುಕಿನ ಜಂಟಾಟವನ್ನ ಮರೆಸುತ್ತವೆ.. ಅಲ್ಲಿನ ಬೃಹದಾಕಾರದ ಶಿಲಾರೂಪವನ್ನ ನೋಡಿದರೆ, ಎಂಥವರು ಪ್ರಕೃತಿಯ ಮಹಾ ಆಕೃತಿಗೆ ತಲೆ ಬಾಗಿಸಲೇ ಬೇಕು,
ಕಾಲಿದಾರಿಯಲ್ಲಿ ನಡೆದು ಗಣೇಶ ದೇವಸ್ಥಾನವನ್ನ ದಾಟಿ, ಮುಂದಕ್ಕೆ ಹೋಗುತ್ತಿದ್ದಂತೆ ಎದುರಾಗೋದು ಮೋಹಿನಿ ಶಿಖರ. ಸುಣ್ಣದ ಕಲ್ಲಿನಿಂದ ನಿರ್ಮಿತವಾದ ಈ ಶಿಖರ ಮೊದಲ ನೋಟದಲ್ಲೇ ಪ್ರವಾಸಿಗರ ಹೃದಯದಲ್ಲಿ ಅಚ್ಚೊತ್ತಿಬಿಡುತ್ತದೆ. ಅಲ್ಲಿಂದು ಮೆಟ್ಟಿಲುಗಳನ್ನ ಏರುತ್ತಾ, ಮುಂದೆ ಸಾಗಿದೊಡನೆ ಕಾಣುವುದೇ ಭೈರವೇಶ್ವರ ಶಿಖರ. ಇಲ್ಲೆ ಸ್ವಲ್ಪ ಒಳಗಡೆ ಇದೆ ಭೈರವೇಶ್ವರ ದೇವಾಲಯ. ಅಲ್ಲೊಂದು ಬೃಹತ್ ಬಂಡೆಯ ಕೆಳಗೆ ತಾನೆಗೆ ಮೂಡಿಬಂದ ಶಿವಲಿಂಗ ಎರಡು ಮೀಟರ್ ಉದ್ದವಿದೆ. ವಿಶೇಷ ಅಂದ್ರೆ, ಈ ಶಿವಲಿಂಗದ ಮೇಲೆ ಸದಾ ನೀರು ಬೀಳುತ್ತಿರೋದು. ಬಿರುಬೇಸಿಗೆಯಲ್ಲೂ ನೀರು ಮಾತ್ರ ಬತ್ತುವುದಿಲ್ಲ. ಆ ಬೃಹತ್ ಶಿಖರದ ಮೇಲೆ ನೀರು ಎಲ್ಲಿದೆಯೋ? ಅದು ಎಲ್ಲಿಂದ ಬಂದು ಶಿವನ ತಲೆಯ ಮೇಲೆ ಬೀಳುತ್ತೊ? ಇದು ಉತ್ತರ ಸಿಗದ ಪ್ರಶ್ನೆ.
ಅದೆಲ್ಲ ಎನೇ ಇರ್ಲಿ, ಮುಗಿಲೆತ್ತರಕ್ಕೆ ಬೆಳೆದು ನಿಂತ ಗಿಡಿ-ಮರಗಳು, ಶಿಲಾ ಶಿಖರಗಳು, ಎಲ್ಲೆಂದರಲ್ಲಿ ಕಂಡುಬರುವ ಜಲಧಾರೆಗಳು, ದೂರದಲ್ಲೆಲ್ಲೊ ಕೇಳಿಸುವ ಕಾಡುಪ್ರಾಣಿಗಳ ಕೂಗು, ಯಾಣದ ಯಾನವನ್ನ ಅವಿಸ್ಮರಣೀಯಗೊಳಿಸುತ್ತವೆ. ಅಲ್ಲಿನ ಭವ್ಯತೆಯನ್ನ ಕಂಡ ಪ್ರವಾಸಿಗನಿಗೆ ದಣಿವಿನ ಅರಿವೇ ಆಗುವುದಿಲ್ಲ.
ವಿಷ್ಣು ಹೆಗಡೆ, ಕುಮಟಾ
ವಿಷ್ಣು ಹೆಗಡೆ, ಕುಮಟಾ

