Thursday, December 8, 2011

ಬಹಿಷ್ಕಾರವೇ ಲೇಸು...


ಒಲಿಂಪಿಕ್ಸ್ ಶಾಂತಿಯ ಆಚರಣೆ. ಸಮಾನತೆ ಸಾರೊ ಸಾಧನ.. ಐಕ್ಯತೆಯ ಸಂಕೇತ. ಆಟಗಳ ನಡುವಿನ ಅಂತರ ಬೆಸೆಯುವ ವೇದಿಕೆ.. ಆದರೆ, 2012ರಲ್ಲಿ ಲಂಡನ್ನಲ್ಲಿ ನಡ್ಯೊ ಒಲಿಂಪಿಕ್ಸ್ ಇದ್ಕೆ ತದ್ವಿರುದ್ಧ. ಜಾಗತಿಕ ಕ್ರೀಡಾಹಬ್ಬದ ಮೂಲತತ್ವಗಳಿಗೆ ಇಲ್ಲಿ ಬೆಲೆಯೇ ಇಲ್ಲ. ಸಾವಿರಾರು ಕುಟುಂಬವನ್ನ ಬೀದಿಗೆ ತಂದ, ಲಕ್ಷಾಂತರ ಜನರ ಪ್ರಾಣ ಕಿತ್ತುಕೊಂಡ "ಡೌ" ರಾಸಾಯನಿಕ ಕಂಪೆನಿಯೇ ಲಂಡನ್ ಒಲಿಂಪಿಕ್ಸ್ ಪ್ರಾಯೋಜಿಸುತ್ತಿದೆ..! ಎಂಥಾ ವಿಪರ್ಯಾಸ ನೋಡಿ..!!


 ದುರಂತದಲ್ಲಿ ಬಲಿಯಾದವರಿಗೆ ದಶಕಗಳು ಕಳೆದರೂ ಪರಿಹಾರ ಹಣವನ್ನೇ ಕೊಟ್ಟಿಲ್ಲ.. ಆದ್ರೆ, ಒಲಿಂಪಿಕ್ಸ್ ನಂತಹ ಕ್ರೀಡಾಮೇಹಾಳವನ್ನ ಆಯೋಜಿಸೋದಕ್ಕೆ ಬೇಕಾದಷ್ಟು ದುಡ್ಡಿದೆ..!! ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಇದನ್ನ ಪ್ರಶ್ನಿಸದಿರೋದು ನಿಜಕ್ಕೂ ಆಶ್ಚರ್ಯ. ಪ್ರಪಂಚಕ್ಕೆ ಇದೊಂದು ದೊಡ್ಡ ವಿಷಯವಲ್ಲದಿರಬಹುದು. ಆದ್ರೆ, ನಮಗೆ..? ಅಮಾಯಕ ಜೀವಗಳನ್ನ ಬಲಿಪಡೆದ ಘಟನೆಯನ್ನ ನೆನೆಸಿಕೊಂಡ್ರೆ ಮೈಯೆಲ್ಲ ಕುದಿಯುತ್ತೆ. ಅವ್ರ ಆಕ್ರಂದನ ಕಣ್ಮುಂದೆ ಹಾದಿಹೋದಾಗ ಹೃದಯತಲ್ಲಣಿಸುತ್ತೆ..


ನೆತ್ತರಿನ ಚರಿತ್ರೆ ಹೊಂದಿರೊ ಸಂಸ್ಥೆಯೊಂದರ ಪ್ರಾಯೋಜಕತ್ವ ಸ್ವೀಕರಿಸೋದು ಒಲಿಂಪಿಕ್ಸ್ ಮೂಲನೀತಿಗೆ ವಿರುದ್ಧವಾದುದ್ದು. ಹೀಗಾಗಿ ಭಾರತೀಯರು ಈ ಕ್ರೀಡಾಕೂಟವನ್ನ ಬಹಿಷ್ಕರಿಸೋದೆ ಲೇಸು. ಈ ಹಿಂದೆ ಒಲಿಂಪಿಕ್ಸ್ ಕ್ರೀಡೆಯನ್ನ ಕೆಲ ದೇಶಗಳು ಬಹಿಷ್ಕರಿಸಿದ ಉದಾಹರಣೆಗಳಿವೆ.. ನಾವು ಯಾಕೆ ಹಾಗೆ ಮಾಡಬಾರದು..?? ನಮ್ಮ ದೇಶಕ್ಕೆ ಬಂದು, ನಮ್ಮವರನ್ನೇ ಬಲಿತೆಗೆದುಕೊಂಡು ಪಲಾಯನ ಮಾಡಿರೊ "ಡೌ" ಸಂಸ್ಥೆಯ ಮಾಲೀಕನಿಗೆ ದಿಕ್ಕಾರ ಹೇಳಲೇ ಬೇಕು.. ದುರಂತದಲ್ಲಿ ಮಡಿದವರಿಗೆ ಗೌರವ ಸಲ್ಲಿಸೋದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ.. ಇದ್ಕೆ ಕ್ರೀಡಾಪಟುಗಳು ಹೊರತಲ್ಲ..

ವಿಷ್ಣು ಹೆಗಡೆ , ಕುಮಟಾ