ಮೊನ್ನೆ ಶನಿವಾರ.. ವೀಕ್ ಆಫ್ ಇತ್ತು.. ರಿಮೋಟ್ ಹಿಡಿದು 80 ಚಾನಲ್ಗಳನ್ನ ಜಾಲಾಡಿದೆ.. ಯಾವ್ದೆ ಮೂವಿಯಾಗ್ಲಿ, ಒಳ್ಳೆ ಕಾರ್ಯಕ್ರಮವಾಗ್ಲಿ ಇರ್ಲಿಲ್ಲ.. ಮನಸ್ಸಿಗೆ ಹಿತ ಕೊಡುವ, ಮದ ನೀಡುವ ಪ್ರೋಗ್ರಾಮ್, ಊಹುಂ... ಮನಸ್ಸಿನಲ್ಲೆ ಗೊಣಗುತ್ತಾ ಮೇಲೆದ್ದೆ. ಡೋರ್ ತೆಗೆದು ಹೊರಗಡೆ ಹೋದೆ.. ನಿಧಾನವಾಗಿ ಬಿಸುತ್ತಿದ್ದ ತಂಗಾಳಿ ಕೆನ್ನೆಯನ್ನ ಸವರುತ್ತಿತ್ತು. ಇಳಿ ಸಂಜೆಯಲ್ಲಿ ಮರೆಯಾಗುವ ಅರುಣ, ಪಡುವಣದಲ್ಲಿ ಮೂಡಿಸಿದ ರಂಗುರಂಗಿನ ಚಿತ್ತಾರ, ಕಲಾವಿದನ ಕುಂಚಗಳ ಬಣ್ಣವನ್ನ ಹೀರಿದಂತೆ ಕಂಡಿದ್ದು ಸುಳ್ಳಲ್ಲ..
ಹಾಗೆ ಕೆಳಗಿಳಿದು, ಬೋಂಡಾ, ಭಜ್ಜಿ ತಿನ್ನೋಣ ಅಂತಾ ಹೊರಟೆ.. ಆದ್ರೆ, ಹೋಗಿದ್ದು ಮಾತ್ರ ಜಿಲೇಬಿ ಅಂಗಡಿಗೆ.. ಸಿಹಿಯಾದ ಜಿಲೇಬಿಯನ್ನ ಮೆಲ್ಲಗೆ ಮೆಲ್ಲುತ್ತಿದ್ದೆ.. ಬಾಯಿಂದ ಜಾರಿ ಚಿಕ್ಕದೊಂದು ತುಂಡು, ಧಪ್ ಅಂತಾ ಕೆಳಗೆ ಬಿತ್ತು.. 'ಬಿಟ್ಹಾಕು' ಅಂತು ಮನಸ್ಸು.. ಕ್ಷಣಾರ್ಧದಲ್ಲೆ ಚಿಕ್ಕದೊಂದು ಇರುವೆ ದರ್ಶನ. ಅದನ್ನ ನೋಡುತ್ತಿದ್ದ ನನಗೆ ಅಚ್ಚರಿ.. ಜಿಲೇಬಿ ತುಂಡಿನ ಸಣ್ಣ ಸಂದಿಯಿಂದ, ಒಂದೊಂದೆ ಇರುವೆ ಹೊರಗಡೆ ಬರಲಾರಂಬಿಸಿತು.. ಕೈಯಲ್ಲಿದ್ದ ಜಿಲೇಬಿಯನ್ನ ನೋಡಿದೆ.. ಇರುವೆಗಳ ಸಾಲೆ ಇತ್ತು.. ಊಫ್ ಅಂತಾ ಉಗಿದು, ಅಂಗಡಿಯವನಿಗೆ ಹಣಕೊಟ್ಟು, ಬೈಯುತ್ತಾ ಬಂದೆ.. ಬಿಸಿ ಬಿಸಿ ಟೀ ಯನ್ನಾದ್ರು, ಕುಡಿಯೋಣ ಅಂತಾ ಹಾಲು ತಂದೆ.. ಸಕ್ಕರೆ ಡಬ್ಬ ತೆಗೆದ್ರೆ, ಅಲ್ಲೂ ಶಿಸ್ತಿನ ಸಿಪಾಯಿಗಳು ಸಕ್ಕರೆಯನ್ನ ಹೀರುತ್ತಾ ಕೂತಿದ್ವು .. ಈಗ ಯಾರಿಗೆ ಹೇಳೋದು..? ಡಬ್ಬದ ಮುಚ್ಚಳವನ್ನ ಸರ್ಯಾಗಿ ಹಾಕದಿರೋದಕ್ಕೆ ನನಗೆ ನಾನೇ ಬೈದುಕೊಂಡೆ..!!!
ವಿಷ್ಣು ಹೆಗಡೆ, ಕುಮಟಾ
