Monday, August 26, 2013

ಪ್ರವಾಹ














ಮಳೆಯೋ ಮಳೆ
ಭುವಿ-ಬಾನು ಒಂದಾಗುವಂತೆ
ಭೂಮಿ ನಡುಗಿತು
ಬಾಯ್ತೆರೆಯಿತು
ಮನೆಯೇನು, ಪ್ರಾಣವೂ ಹಾರಿತು
ಪ್ರಳಯಾರ್ಭಟಕ್ಕೆ
ವರುಣನ ಮುನಿಸಿಗೆ

ಎಲ್ಲ ಅಯೋಮಯ
ಸಾವಿಗೆ ಶರಣಾಯಿತು
ರಾಶಿ ರಾಶಿ ಜೀವ
ಎಲ್ಲಿ ನೋಡಿದರೆಲ್ಲಿ
ಗುರುತು ಸಿಗದ ಶವಗಳು
ಪಾಳು ಬಿದ್ದ ಆಸ್ತಿ
ಕುಸಿದ ಕಟ್ಟಡಗಳು
 

ನೊಂದವರ ಆಕ್ರಂದನ
ಮುಗಿಲು ಮುಟ್ಟಿತ್ತು
ಪ್ರಕೃತಿ ಮುನಿದಂತಿತ್ತು
ಮಾನವನ ದುರಾಸೆಗೆ


ವಿಷ್ಣು ಹೆಗಡೆ, ಕುಮಟಾ