Sunday, December 4, 2016

ಇಬ್ಬನಿಯ ಚಿತ್ತಾರ


 







ಮುಂಜಾವಿನ ಮುಸುಕಲ್ಲಿ
ಕಾಡಂಚಿನಲಿ
ಹತ್ತಿಹರಡಿದಂತೆ ಕಾಣುವ
ಇಬ್ಬನಿಯ ಚಿತ್ತಾರ
ಹೂಬಿಸಿಲ ಹೊಳಪಿನಲಿ
ಎಲೆಯಂಚಿನಲಿ
ಬೆಳಕು ಬೆರಗಿನ ಶೃಂಗಾರ 


- ವಿಷ್ಣು ಹೆಗಡೆ, ಕುಮಟಾ

ಬಿರಿದ'ಮನ'...

ಬಿರುಕುಬಿಟ್ಟಿದೆ ಮನ
ಒಣ ಚರ್ಮದಂತೆ
ತೇವವಿಲ್ಲದ
ಶುಷ್ಕ ಗಾಳಿಗೆ ಸಿಲುಕಿ
ಈ ಬೇಗೆಯಲಿ ಬೆಂದು
ಎದೆಯುಸಿರು
ಬಿಸಿಯಾಗಿಹುದು
ಬಿಸಿಯ ಬೇಗೆ
ಉಸಿರುಗುಟ್ಟುವ ಮುನ್ನ
ತಣಿಸು ತನುಮನವ
ಓ ತಂಗಾಳಿಯೇ


- ವಿಷ್ಣು ಹೆಗಡೆ, ಕುಮಟಾ

Saturday, November 26, 2016

ಈ ಚಳಿಯ ತಾಳೇನು?


ಈ ಚಳಿಯ ಸೊಬಗು
ಉಳ್ಳವರಿಗಷ್ಟೆ ಬೆರುಗು

ಬೆಚ್ಚನೆಯ ಮನೆಯೊಳಗೆ
ದಪ್ಪನೆಯ ರಗ್ಗು-ಗುಡಾರ
ಹೊದ್ದು ಮುದುಡಿ 
ಮಲಗಿದ್ದವರಿಗೆ 
ಈ ಚಳಿಯ ಸೊಬಗು 
ಬಲು ಬೆರುಗು

ಪ್ರಯಣ ಪಕ್ಷಿಗಳಿಗೆ
ಪ್ರವಾಸಿಗಳಿಗೆ 
ವೀಕೆಂಡ್ ಪ್ರಿಯರಿಗೆ
ಈ ಚಳಿಯ ಸೊಬಗು 
ಬಲು ಬೆರುಗು

ಅಸ್ವಸ್ಥರು, ಅನಾಥರು
ನಿರ್ಗತಿಕರು, ನಿರಾಶ್ರಿತರಿಗೆ
ಇದು ಬೆರಗಲ್ಲ, ಸೊಬಗಲ್ಲ
ಉಸಿರುಗಟ್ಟುವ ಬೇಗೆ
ಹೆಪ್ಪುಗಟ್ಟಿಸುವ ಶೀತ

ಅವರೆಲ್ಲರೂ
ಮುದುಡಿ ಮಲಗಿಹರು
ಮರುಕಲು ಮನೆಯೊಳಗೆ
ನಿಶ್ಚಲ ಶವದಂತೆ
ನಾಳಿನ ಹಗಲಿಗಾಗಿ ಕಾಯುತ
ಬೆಚ್ಚನೆಯ ಮನೆಯಲಿಲ್ಲ
ದಪ್ಪನೆಯ ರಗ್ಗು-ಗುಡಾರಗಳಿಲ್ಲ
ಹೆಪ್ಪುಗಟ್ಟಿಸುವ
ಈ ಚಳಿರಾತ್ರಿಯಲಿ
ಎಲ್ಲಿಯ ನಿದ್ದೆ ಅವರಿಗೆ

ಹೌದು, ಈ ಚಳಿಯ ಸೊಬಗು
ಉಳ್ಳವರಿಗಷ್ಟೆ ಬೆರುಗು..!

- ವಿಷ್ಣು ಹೆಗಡೆ, ಕುಮಟಾ

Sunday, July 10, 2016

ಮಳೆಹನಿ...!













ಹಸಿರು ಬಿತ್ತುವ 
ಆಸೆಗೆ ನೀರೂಣಿಸು
ಭುವಿಯೆದೆಯ 
ಬೇಗುದಿ ತಣಿಸು
ಬಂದುಬಿಡು ಬೇಗನೆ
ಮಳೆಹನಿಯೇ..! 

ಹುಣ್ಣಿಮೆ ಬೆಳದಿಂಗಳ ಹೀರಿ
ಮದವೇರಿದೆ ಮನ
ಮುತ್ತಿನ ಮಳೆಸುರಿಸುತ
ಬೇಗನೆ ಬಂದುಬಿಡು 
ಮಳೆಹನಿಯೇ..!

ಇಳೆಯ ಬೇಗುದಿ 
ಎದೆಯಾಳದೊಳಗಿಳಿದು
ಸುಡುವ ಹೃದಯವ
ತಂಪೆರೆದು ತಣಿಸು 
ಬಂದುಬಿಡು ಬೇಗನೆ 
ಮಳೆಹನಿಯೇ..!

- ವಿಷ್ಣು ಹೆಗಡೆ, ಕುಮಟಾ

Tuesday, June 28, 2016

ವಿರಹವೇದನೆ...











ಮುಗಿಲೆಂಬ ಕೆನ್ನೆಯ 
ಮೇಲಿಂದ ಜಾರುವ ಹನಿಯಂತೆ
ಅವಳ ಕಣ್ಣಿನಿಂದ 
ಜಿನುಗುತ್ತಿದೆ ನೀರಹನಿ
ಅವಳಿಗೂ-ಮುಗಿಲಿಗೂ
ವಿರಹವೇದನೆಯಂತೆ..!

-----------------------

ಇಬ್ಬನಿಯ ತಂಪಿಲ್ಲದೆ
ಕೆಂಪಗಾಗಿದೆ ಭೂಮಿ
ಕಂಪಿಸುತಿದೆ ಇಬ್ಬನಿಗಾಗಿ
ನಿನ್ನ ಕೆನ್ನೆಯಂತೆ..!

- ವಿಷ್ಣು ಹೆಗಡೆ, ಕುಮಟಾ

Sunday, June 26, 2016

ಡ್ರೀಮ್











ನನ್ನಾಕೆಯ 
ಮನವೀಗ ಹಸೀ ಬಾಣಂತಿ
ಮಗು ಜನಿಸುವ ಮುನ್ನವೇ
ನೆನಪುಗಳೆಲ್ಲಾ ಗರ್ಭಕಟ್ಟಿ
ಮನದಲ್ಲೆ ಶುರುವಾಗಿದೆ
ಅವಳ ಬೊಗಸೆಯಾಟ 
ಕನಸೆಂಬ ಭ್ರೂಣ ಬೆಳೆದು
ಮುಗುವಾಗಿ 
ಧರೆಗೆ ಬರುವ ಮುನ್ನವೇ

    ಪ್ರತಿದಿನ, ಪ್ರತಿಕ್ಷಣ
    ಆತಂಕ ಅವಳ ಮನದಿ
    ಕಣ್ತುಂಬ ಕಾಳಜಿ
    ಆರೈಕೆಯ ಕನವರಿಕೆ
    ಅನುದಿನ, ಅನುಕ್ಷಣ
    ಕನಸೆಂಬ ಭ್ರೂಣ ಬೆಳೆದು
    ಮುಗುವಾಗಿ 
    ಧರೆಗೆ ಬರುವ ಮುನ್ನವೇ


- ವಿಷ್ಣು ಹೆಗಡೆ, ಕುಮಟಾ

ಓ ತಂಗಾಳಿಯೇ












ಮರೆಯಬೇಡ
ಓ ತಂಗಾಳಿಯೇ 
ನನ್ನಾಸೆ ತಿಳಿಸು ಅವಳಿಗೆ
ಮೃದುವಾಗಿ ಮೈಸೋಕಿ
ಮೆತ್ತನೆ ಹೇಳು
ಯಾರಿಗೂ ಕೇಳದಂತೆ!

      ಹೆಪ್ಪುಗಟ್ಟಿ ಹೋದೆ
      ನೀನವಳ ಮೈಸವರಿ
      ಅರುಹಿದ ಸುದ್ದಿ ತಿಳಿದು
      ಕತ್ತಲಾಗಿದೆಯೆಂದು ಭ್ರಮಿಸಿ 
      ಕನಸು ಕಂಡೆ
      ನಡು ಮಧ್ಯಾಹ್ನ

ಓ ತಂಗಾಳಿಯೇ 
ನನ್ನಾಸೆ ತಿಳಿಸು ಅವಳಿಗೆ
ಕತ್ತಲಾಗುವ ಮುನ್ನ


- ವಿಷ್ಣು ಹೆಗಡೆ, ಕುಮಟಾ

Monday, June 13, 2016

ಕಾಗೆ













ಕಾ(ಗೆ)ಲೆಳೆದು
ನಿಂದಿಸುವರು
ಇಂದು..!

          ಕರೆದು ಪೂಜಿಸುವರು
          ಶ್ರದ್ಧೆಯಿಂದ 
          ಶ್ರಾದ್ಧದಂದು..! 
          ಎಲೆ ಮಾನವ

ವಿಕಾರ,ವಿಕ್ಷಿಪ್ತ,ವಿಕೃತಿಗೆ
ನಾನು ಉದಾಹರಣೆ
ನನ್ನ ಹೆಸರು
ಅಪಹಾಸ್ಯದ ವಸ್ತು
ಕಪ್ಪು-ಬಿಳುಪಿನ ವ್ಯತ್ಯಾಸಕ್ಕೆ 
ನನ್ನ ಮೈಬಣ್ಣವೇ ಹೋಲಿಕೆ
ಎಲೆ ಮಾನವ

       ಶನಿಯ ವಾಹನವೆಂಬುದು
       ಹೆಸರಿಗಷ್ಟೆ
       ನನಗಂಟಿಗೆ 
      'ಅಪಶಕುನ'ದ ಪಟ್ಟ
       ಕರ್ಕಶ ಧ್ವನಿಗೂ
       ನನ್ನದೆ ನೆನಪು

ಆದರೆ ನಾನೆಂದು 
ಬಣ್ಣ ಬದಲಿಸುವುದಿಲ್ಲ
ನಿನ್ನಹಾಗೆ..!
ಎಲೆ ಮಾವನ


- ವಿಷ್ಣು ಹೆಗಡೆ, ಕುಮಟಾ