Sunday, December 4, 2016

ಬಿರಿದ'ಮನ'...

ಬಿರುಕುಬಿಟ್ಟಿದೆ ಮನ
ಒಣ ಚರ್ಮದಂತೆ
ತೇವವಿಲ್ಲದ
ಶುಷ್ಕ ಗಾಳಿಗೆ ಸಿಲುಕಿ
ಈ ಬೇಗೆಯಲಿ ಬೆಂದು
ಎದೆಯುಸಿರು
ಬಿಸಿಯಾಗಿಹುದು
ಬಿಸಿಯ ಬೇಗೆ
ಉಸಿರುಗುಟ್ಟುವ ಮುನ್ನ
ತಣಿಸು ತನುಮನವ
ಓ ತಂಗಾಳಿಯೇ


- ವಿಷ್ಣು ಹೆಗಡೆ, ಕುಮಟಾ