Sunday, December 4, 2016

ಇಬ್ಬನಿಯ ಚಿತ್ತಾರ


 







ಮುಂಜಾವಿನ ಮುಸುಕಲ್ಲಿ
ಕಾಡಂಚಿನಲಿ
ಹತ್ತಿಹರಡಿದಂತೆ ಕಾಣುವ
ಇಬ್ಬನಿಯ ಚಿತ್ತಾರ
ಹೂಬಿಸಿಲ ಹೊಳಪಿನಲಿ
ಎಲೆಯಂಚಿನಲಿ
ಬೆಳಕು ಬೆರಗಿನ ಶೃಂಗಾರ 


- ವಿಷ್ಣು ಹೆಗಡೆ, ಕುಮಟಾ

ಬಿರಿದ'ಮನ'...

ಬಿರುಕುಬಿಟ್ಟಿದೆ ಮನ
ಒಣ ಚರ್ಮದಂತೆ
ತೇವವಿಲ್ಲದ
ಶುಷ್ಕ ಗಾಳಿಗೆ ಸಿಲುಕಿ
ಈ ಬೇಗೆಯಲಿ ಬೆಂದು
ಎದೆಯುಸಿರು
ಬಿಸಿಯಾಗಿಹುದು
ಬಿಸಿಯ ಬೇಗೆ
ಉಸಿರುಗುಟ್ಟುವ ಮುನ್ನ
ತಣಿಸು ತನುಮನವ
ಓ ತಂಗಾಳಿಯೇ


- ವಿಷ್ಣು ಹೆಗಡೆ, ಕುಮಟಾ